ಹೇಳು ಏತಕೆ ಜೀವ ನೊಂದಿದೆ
ಹೇಳು ಏತಕೆ ಮೊಗವು ಬಾಡಿದೆ
ಹೇಳು ಎನ್ನ ಮನದನ್ನೆ - ಹೇಳು ನಿನ್ನ ಚಿಂತೆ
ಹರಳು ಬಿದ್ದ ಒಡವೆಯಂತೆ
ಹೆರಳು ತೆಗೆದ ಸುಕೇಶಿನಿಯಂತೆ
ಕುಂದಿದೆ ಕಳೆಯು ಇಂದು
ಹೇಳು ಎನ್ನ ಮನದನ್ನೆ - ಹೇಳು ನಿನ್ನ ಚಿಂತೆ
ಹೊನಲು ಬೆಳಕ ಚಂದ್ರಮನುಂಟು
ಮುದವ ತರುವ ಭೋಜನವುಂಟು
ಮುದಿಸದು ನಿನ್ನನು ಏನೂ
ಹೇಳು ಎನ್ನ ಮನದನ್ನೆ - ಹೇಳು ನಿನ್ನ ಚಿಂತೆ
ಸ್ವರ್ಗ ಸುಖವ ಕಂಡೆನು ಇಲ್ಲಿಯೆ ನಾನು
ಮನವನರಿತ ಗೆಳೆಯನು ನೀನು
ದೂರಲು ಏನಿದೆ ಚಿಂತೆ
ಏನು ಇಲ್ಲ ಇನಿಯ - ಎನ್ನ ಮನದ ಒಡೆಯ
Sunday, October 19, 2008
Subscribe to:
Posts (Atom)